ನೀನೆ ನೋಡು ಕನ್ನಡ ನಾಡ : ಕನ್ನಡ ನಾಡಿನ ಸಂಸ್ಕೃತಿ ಸಿರಿಯ .
ಬಣ್ಣದ ಬಾವುಟ ತೋರಿದೆ ಭಾವುಕತೆ
ಚಿನ್ನದ ನುಡಿಯಿದು ಸಾರಿದೆ ಭಾವ್ಯಕ್ಯತೆ
ಧರ್ಮದ ಭೇದ ,ಮಾಡಿಲ್ಲ ಎಂದೂ , ಹಿಂದೂ ಮುಸ್ಲಿಂ ಕ್ರಿಸ್ತ ಎಂದು .
ಕರ್ಮವ ನಾವು ಮರೆಯಲ್ಲ ಎಂದೂ , ಅನ್ನ ನೀಡುವ ರೈತರೇ ನಮಗಾಧಾರ ಎಂದೆಂದೂ .
ಕೇಳು ನೀನು ಕನ್ನಡ ನುಡಿಯ : ಚಿನ್ನದ ನಾಡಿನ ರತ್ನನ ಪದವ .
ಆಡು ನೀನು ಕನ್ನಡ ಪದವ : ಕಾಫಿ ನಾಡಿನ ಗುಂಡಪ್ಪನ ಕಗ್ಗವ .
ಕಾವೇರಿ ಹರಿವಳು ಈ ನಾಡಲ್ಲಿ ಚಾಮುಂಡಿ ತಾಯಿಯ ಮಡಿಲಲ್ಲಿ ,
ಶರಾವತಿ ನಲಿವಳು ಜೋಗದ ಹೆಸರಲಿ ಮಲೆನಾಡಿನ ಆ ನೆಲದಲ್ಲಿ .
ನೆನಪು ಕಾಡುತಿಹುದು ಸಂಗೊಳ್ಳಿ ರಾಯಣ್ಣನನು
ಕನಸು ಬೇಡುತಿಹುದು ವಿಜಯನಗರ ಸಾಮ್ರಾಜ್ಯವನು
ಮನಸು ನೆನೆಯುತಿಹುದು ಆ ವೀರವನಿತೆ ಓಬವ್ವನನು
ದೇಶಕೆ ಭಾರತ ರತ್ನಗಳ ಕೊಟ್ಟಂತಹ ನಾಡಿದು
ದೇಶಕ್ಕಾಗೋರಾಡುವ ಸೈನಿಕರ ತವರೂರಿದು
ಕರುಣೆ -ಪ್ರೀತಿ -ಮಮತೆ ಇಲ್ಲೆಂದಿಗೂ ಬರಿದಾಗದು
ಬಣ್ಣದ ಬಾವುಟ ತೋರಿದೆ ಭಾವುಕತೆ
ಚಿನ್ನದ ನುಡಿಯಿದು ಸಾರಿದೆ ಭಾವ್ಯಕ್ಯತೆ
No comments:
Post a Comment