Wednesday, 31 October 2018

Sinchana

ಆ ಮಿಂಚಿನ ಬೆಳಕಲ್ಲಿ , ಗುಡುಗಿನ ಶಬ್ದದಲ್ಲಿ , ಮೈ ಕೊರೆಯುವ ತಣ್ಣನೆಯ ಗಾಳಿಯಲ್ಲಿ , ಮನಸಿಗೆ ಮುದ ಕೊಡುವ ಕೆರೆಯ ದಡದಲ್ಲಿ ಕೈ ನಡುಗಿಸುತ್ತಾ ....... ಬಿಳಿ ಹಾಳೆಯ ಮೇಲೆ ಬರೆದ ಅವಳ ನೆನಪುಗಳ ಪುಟ ತಿರುವಿಸಿ ನೋಡಿದರೆ , ಮತ್ತದೇ ಮಿಂಚಿನ ಬೆಳಕಿನ ವಾತಾವರಣ , ಗುಡುಗಿನ ಸನ್ನಿವೇಶ , ಬೀಸುವ ಗಾಳಿಗೆ ತೂರಿಬಂದು ಮೈ-ಮನಸ್ಸನ್ನು ಒದ್ದೆ ಮಾಡಿದ ಆ ಮಳೆಹನಿಯ ನೆನಪುಗಳು , ಹಾಗೆ ಮನದಲ್ಲಿ ಹಾದು ಹೋಗುವವು ........
ಅದೇಕೋ ಕಾಣೆ ಅವಳದೇ ನೆನಪುಗಳು , ನೆಪಮಾತ್ರಕ್ಕೆ ಮರೆತರೂ ಕೊರೆಯುತ್ತಿವೆ ಮರೆಯಲು ಬರೆಯುತಿರುವ  ಹಾಳೆಗಳನ್ನು ನೋಡಿದರೆ 'ಮತ್ತದೇ ನೆನಪಲ್ಲಿ ನೆನಪಾಗಿ ಉಳಿದು ಕನಸಲ್ಲಿ ಕಾಡುತ್ತಿವೆ ಅವಳ ನೆನಪುಗಳು '.



ಮುಂದುವರೆಯುವುದು

Baruveya ?

ನನ್ನಾತ್ಮಕತೆಗೆ ಮುನ್ನುಡಿಯ ಬರೆದು ಕೊಡುವೆಯ
ನನ್ನಾತ್ಮದ್ವ್ಯತೆಯ ಕನ್ನಡಿಯ ಒರೆಸಿ ಕೊಡುವೆಯ
ಪುಣ್ಯಾತ್ಮನಾಗುವೆನು ಒಮ್ಮೆ ನನ್ನೆಸರ ಕರೆವೆಯ
ಪುಣ್ಯಾತಗಿತ್ತಿ ಸ್ವಲ್ಪ ನಾಚುತಾ ನನ್ನ ಬಳಿ ಬರುವೆಯಾ ?

Monday, 29 October 2018

KANNADA

ನೀನೆ ನೋಡು ಕನ್ನಡ ನಾಡ : ಕನ್ನಡ ನಾಡೆ೦ಬ ಗಂಧದ ಗುಡಿಯ .
ನೀನೆ ನೋಡು ಕನ್ನಡ ನಾಡ : ಕನ್ನಡ ನಾಡಿನ ಸಂಸ್ಕೃತಿ ಸಿರಿಯ .

ಬಣ್ಣದ ಬಾವುಟ ತೋರಿದೆ ಭಾವುಕತೆ
ಚಿನ್ನದ ನುಡಿಯಿದು ಸಾರಿದೆ ಭಾವ್ಯಕ್ಯತೆ


ಧರ್ಮದ ಭೇದ ,ಮಾಡಿಲ್ಲ ಎಂದೂ , ಹಿಂದೂ ಮುಸ್ಲಿಂ ಕ್ರಿಸ್ತ  ಎಂದು .
ಕರ್ಮವ ನಾವು ಮರೆಯಲ್ಲ ಎಂದೂ , ಅನ್ನ ನೀಡುವ ರೈತರೇ ನಮಗಾಧಾರ ಎಂದೆಂದೂ .

ಕೇಳು ನೀನು ಕನ್ನಡ ನುಡಿಯ : ಚಿನ್ನದ ನಾಡಿನ ರತ್ನನ ಪದವ .
ಆಡು ನೀನು ಕನ್ನಡ ಪದವ : ಕಾಫಿ ನಾಡಿನ ಗುಂಡಪ್ಪನ ಕಗ್ಗವ .

ಕಾವೇರಿ ಹರಿವಳು ಈ ನಾಡಲ್ಲಿ ಚಾಮುಂಡಿ ತಾಯಿಯ ಮಡಿಲಲ್ಲಿ ,
ಶರಾವತಿ ನಲಿವಳು ಜೋಗದ ಹೆಸರಲಿ ಮಲೆನಾಡಿನ ಆ ನೆಲದಲ್ಲಿ .

ನೆನಪು ಕಾಡುತಿಹುದು ಸಂಗೊಳ್ಳಿ ರಾಯಣ್ಣನನು
ಕನಸು ಬೇಡುತಿಹುದು ವಿಜಯನಗರ ಸಾಮ್ರಾಜ್ಯವನು
ಮನಸು ನೆನೆಯುತಿಹುದು ಆ ವೀರವನಿತೆ ಓಬವ್ವನನು

ದೇಶಕೆ ಭಾರತ ರತ್ನಗಳ ಕೊಟ್ಟಂತಹ ನಾಡಿದು
ದೇಶಕ್ಕಾಗೋರಾಡುವ ಸೈನಿಕರ ತವರೂರಿದು
ಕರುಣೆ -ಪ್ರೀತಿ -ಮಮತೆ ಇಲ್ಲೆಂದಿಗೂ ಬರಿದಾಗದು

ಬಣ್ಣದ ಬಾವುಟ ತೋರಿದೆ ಭಾವುಕತೆ
ಚಿನ್ನದ ನುಡಿಯಿದು ಸಾರಿದೆ ಭಾವ್ಯಕ್ಯತೆ

Monday, 15 October 2018

Waste paper

ಕಣ್ಮುಚ್ಚಿಕೊಂಡು ನಾ ಬರೆದೆ ಒಂದು ಕಲ್ಪನಾ ಲೋಕದ ಚಿತ್ರ 
ಕಣ್ಬಿಟ್ಟು ನೋಡಿದ ಮೇಲೆಯೇ ಗೊತ್ತಾಗಿದ್ದು ಆ ಪೇಪರ್  ವೇಸ್ಟ್  ಆಗಿದೆ ಅಂತ